Skip to main content

Hanuman Chalisa Kannada Meaning

Hanuman Chalisa Meaning in Kannada:


Word by Word Meaning:

ಜಯ ಹನುಮಾನ ಙ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ || 1 ||

ಕಪೀಶ-ಕಪಿ+ಈಶ-ರಾಜ, ಉಜಾಗರ-ಬೆಳಗುವವನೇ

ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ || 2 ||

ದೂತ-ಸಂದೇಶವಾಹಕ, ಧಾಮಾ-ವಾಸಿಸುವ ಸ್ಥಳ, ನಾಮಾ-ಹೆಸರುಗಳು

ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ ||3 ||

ಬಜರಂಗೀ-ವಜ್ರ+ಅಂಗಿ, ಸಂಗೀ-ಸಂಘ ಉಳ್ಳವನೇ

ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ || 4 ||

ಹಾಥವಜ್ರ ಔ ಧ್ವಜಾ ವಿರಾಜೈ |
ಕಾಂಥೇ ಮೂಂಜ ಜನೇವೂ ಸಾಜೈ || 5||

ಸಾಜೈ-ಅಲಂಕೃತ

ಶಂಕರ ಸುವನ ಕೇಸರೀ ನಂದನ |
ತೇಜ ಪ್ರತಾಪ ಮಹಾಜಗ ವಂದನ || 6 ||

ಸುವನ-ಅವತಾರ

ವಿದ್ಯಾವಾನ ಗುಣೀ ಅತಿ ಚಾತುರ |
ರಾಮ ಕಾಜ ಕರಿವೇ ಕೋ ಆತುರ || 7 ||

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ || 8||

ರಸಿಯಾ-ಆನಂದಪಡುವವನೇ, ಬಸಿಯಾ-ನೆಲೆಸು

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
ವಿಕಟ ರೂಪಧರಿ ಲಂಕ ಜರಾವಾ || 9 ||

ಜರಾವಾ-ಸುಟ್ಟವನೇ

ಭೀಮ ರೂಪಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ || 10 ||

ಸಂವಾರೇ-ಮಾಡಿದವನೇ

ಲಾಯ ಸಂಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರಲಾಯೇ || 11 ||

ಉರಲಾಯೇ-ಅಪ್ಪಿಕೊಂಡ

ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ || 12 ||

ಕೀನ್ಹೀ-ಮಾಡು, ಬಡಾಯೀ-ಹೊಗಳಿದ

ಸಹಸ ವದನ ತುಮ್ಹರೋ ಯಶಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ || 13 ||

ಸನಕಾದಿಕ ಬ್ರಹ್ಮಾದಿ ಮುನೀಶಾ |
ನಾರದ ಶಾರದ ಸಹಿತ ಅಹೀಶಾ || 14 ||

ಅಹೀಶಾ-ಆದಿಶೇಷ

ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ || 15 ||

ಜಹಾಂ-ಎಲ್ಲೇ ಆಗಲಿ, ಕೋವಿದ-ಹಾಡುಗಾರ, ಕಹಿ-ಹೇಗೆ

ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜಪದ ದೀನ್ಹಾ || 16 ||

ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯೇ ಸಬ ಜಗ ಜಾನಾ || 17 ||

ಭಯೇ-ಆಗು

ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ || 18 ||

ಪರ-ಕಡೆಗೆ, ತಾಹಿ-ಅದನ್ನು, ಜಾನೂ-ತಿಳಿದುಕೊಳ್ಳುವುದು

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ || 19 ||

ಮೇಲಿ-ತೆಗೆದುಕೊಂಡು, ಮಾಹೀ-ಇಟ್ಟುಕೊಳ್ಳುವುದು, ಅಚರಜ-ಆಶ್ಚರ್ಯವಲ್ಲ

ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || 20 ||

ಜೇತೇ-ಯಾವುದೇ, ತೇತೇ-ಅದು

ರಾಮ ದುಆರೇ ತುಮ ರಖವಾರೇ |
ಹೋತ ನ ಆಙ್ಞಾ ಬಿನು ಪೈಸಾರೇ || 21 ||

ಬಿನು-ಇಲ್ಲದೆ, ಪೈಸಾರೇ-ಪ್ರವೇಶಿಸುವುದಕ್ಕಾಗುವುದಿಲ್ಲ

ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರ ನಾ || 22 ||

ಆಪನ ತೇಜ ತುಮ್ಹಾರೋ ಆಪೈ |
ತೀನೋಂ ಲೋಕ ಹಾಂಕ ತೇ ಕಾಂಪೈ || 23 ||

ಆಪನ-ಆಪೈ-ನಿನ್ನ, ಹಾಂಕ-ಘರ್ಜನೆ, ಕಾಂಪೈ-ನಡುಗುವುದು

ಭೂತ ಪಿಶಾಚ ನಿಕಟ ನಹಿ ಆವೈ |
ಮಹವೀರ ಜಬ ನಾಮ ಸುನಾವೈ || 24 ||

ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ || 25 ||

ಹರೈ-ಹೋಗಲಾಡಿಸು, ಪೀರಾ-ನೋವು

ಸಂಕಟ ಸೇಂ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ || 26 ||

ಕ್ರಮ-ಕಾರ್ಯ

ಸಬ ಪರ ರಾಮ ತಪಸ್ವೀ ರಾಜಾ |
ತಿನಕೇ ಕಾಜ ಸಕಲ ತುಮ ಸಾಜಾ || 27 ||

ಪರ-ಮೇಲು, ಸಾಜಾ-ಮಾಡಿದೆ

ಔರ ಮನೋರಧ ಜೋ ಕೋಯಿ ಲಾವೈ |
ಸೋಯ ಅಮಿತ ಜೀವನ ಫಲ ಪಾವೈ || 28 ||

ಸೋಯ-ಆ

ಚಾರೋ ಯುಗ ಪರಿತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ || 29 ||

ಪರಸಿದ್ಧ-ಪ್ರಸಿದ್ಧ

ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ || 30 ||

ನಿಕಂದನ-ಸಂಹಾರ, ದುಲಾರೇ-ಪ್ರೀತಿಯವನೇ

ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
ಅಸ ವರ ದೀನ್ಹ ಜಾನಕೀ ಮಾತಾ || 31 ||

ರಾಮ ರಸಾಯನ ತುಮ್ಹಾರೇ ಪಾಸಾ |
ಸಾದ ರಹೋ ರಘುಪತಿ ಕೇ ದಾಸಾ || 32 ||

ತುಮ್ಹರೇ ಭಜನ ರಾಮಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ || 33 ||

ಅಂತ ಕಾಲ ರಘುವರ ಪುರಜಾಯೀ |
ಜಹಾಂ ಜನ್ಮ ಹರಿಭಕ್ತ ಕಹಾಯೀ || 34 ||

ಕಹಾಯೀ-ಕರೆಯುತ್ತಾರೆ

ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವ ಸುಖ ಕರಯೀ || 35 ||

ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲ ವೀರಾ || 36 ||

ಸುಮಿರೈ-ಸ್ಮರಿಸಿದರೆ

ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರೋ ಗುರುದೇವ ಕೀ ನಾಯೀ || 37 ||

ಗೋಸಾಯೀ-ಒಡೆಯ, ನಾಯೀ-ತರಹ

ಜೋ ಶತ ವಾರ ಪಾಠ ಕರ ಕೋಯೀ |
ಛೂಟಹಿ ಬಂದಿ ಮಹಾ ಸುಖ ಹೋಯೀ || 38 ||

ಪಾಠ-ಪಠನೆ, ಬಂದಿ-ಬಂಧನ

ಜೋ ಯಹ ಪಡೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಶಾ || 39 ||

ಸಾಖೀ-ಸಾಕ್ಷಿ

ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ || 40 ||

ಚೇರಾ-ಸೇವಕ, ಮಹ-ನನ್ನ, ಡೇರಾ-ಮನೆ



Hanuman Chalisa Full Meaning in Kannada:

ಓ ಹನುಮಾನ್ ನಿನಗೆ ಜಯವಾಗಲಿ ನೀನು ಜ್ಞಾನ ಮತ್ತು ಗುಣಗಳ ನಿಧಿ ಅಹುದು
ಕಪೀಶನೇ ಜಯವಾಗಲಿ ನಿನ್ನ ತೇಜವು ಮೂರು ಲೋಕಗಳಲ್ಲಿ ತುಂಬಿದೆ|೧|

ರಾಮನ ದೂತನೇ ಅಳೆಯಲಾರದ ಶಕ್ತಿ ನಿನ್ನಲ್ಲಿದೆ
ಅಂಜನಾಪುತ್ರನೇ ಪವನ(ಗಾಳಿ)ಸುತನೇ|೨|

ಮಹಾವೀರನೇ, ವಿಕ್ರಮನೇ, ಭಜರಂಗಿ(ವಜ್ರಕಾಯ)
ಕೆಟ್ಟ ಬುದ್ದಿ ನಾಶಮಾಡುವವನೇ ಒಳ್ಳೆಯ ಬುದ್ಧಿಗಳನ್ನ ಉಳ್ಳವನೇ |೩|

ಬಂಗಾರದಂತೆ ಹೊಳೆಯುವ ಶರೀರ ಉಳ್ಳವನೇ ಸುಬೇಶನೇ(ಒಳ್ಳೆಯ ಬಟ್ಟೆ ದಾಹರಿಸಿದವನೇ)
ಕಿವಿಗಳಿಗೆ ಓಲೆ ಧರಿಸಿದವನೇ ಗುಂಗುರು ಕೂದಲು ಉಳ್ಳವನೇ |೪|

ಹೇ ಹನುಮಂತ ನೀನು ವಜ್ರಾಯುಧ ಹಾಗೂ ಧ್ವಜ ಹಿಡಿದಿರುವೆ
ಮುಂಜಿ ಎಂದರೆ ಮುಂಜ ಹುಲ್ಲಿನ ಯ್ಗನೋಪವೀತ ಭುಜದಲ್ಲಿ ಧರಿಸಿದವನೇ|೫|

ಶಂಕರನ ರೂಪನೇ, ಕೇಸರಿನಂದನನೇ
ತೇಜ, ಪ್ರತಾಪ ಉಳ್ಳವನೇ ಮಹಾಜಗ ವಂದಿತನೇ|೬|

ವಿದ್ಯಾವಾನ್ ಒಳ್ಳೆ ಗುಣ ಉಳ್ಳವನೇ ಅತಿ ಚತುರನೆ
ರಾಮನ ಕೆಲಸ ಮಾಡಲು ನಿನಗೆ ಆತುರವಿದೆ |೭|

ಪ್ರಭುಚರಿತೆ ಕೇಳಿ ಆನಂದಪಡುತ್ತೀಯ
ರಾಮ, ಲಕ್ಷ್ಮಣ ಸೀತೆಯರು ನಿನ್ನ ಮನಸಿನಲ್ಲಿ ಇರುತ್ತಾರೆ |೮|

ಸೂಕ್ಷ್ಮರೂಪ ತಳೆದು ಸೀತೆಯನ್ನು ನೋಡಿದೆ
ಭಯಂಕರ ರೂಪ ತಳೆದು ಲಂಕೆಯನ್ನು ಸುಟ್ಟೆ|೯|

ಭಯಂಕರ ರೂಪ ತಳೆದು ಅಸುರರನ್ನ ಸಂಹಾರ ಮಾಡಿದೆ
ಚಂದ್ರವಂಶದ ರಾಮನ ಕೆಲಸ ಸುಲಭ ಮಾಡಿದೆ|೧೦|

ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿದೆ
ರಘುವೀರನು ಸಂತೋಷದಿಂದ ನಿನ್ನನ್ನು ಅಪ್ಪಿಕೊಂಡ|೧೧|

ರಘುಪತಿ ನಿನ್ನನ್ನು ಬಹಳ ಹೊಗಳಿದ
ನೀನು ನನ್ನ ಪ್ರಿಯನು ಭರತನಂತೆ ತಮ್ಮ|೧೨|

ಸಹಸ್ರ ಶರೀರವುಳ್ಳ ಆದಿಶೇಷನು ನಿನ್ನ ಮಹಿಮೆಯನ್ನು ಹಾಡಿದ್ದಾನೆ
ಹೀಗೆ ಹೇಳುತ್ತಾ ರಾಮನು ನಿನ್ನನ್ನು ಅಪ್ಪಿಕೊಂಡ|೧೩|

ಸನಕ, ಬ್ರಹ್ಮ ಮತ್ತು ಇತರ ಮುನಿಗಳು,
ನಾರದ, ಶಾರದೆ ಮತ್ತು ಆದಿಶೇಷ |೧೪|

ಯಮ, ಕುಬೇರ, ದಿಕ್ಪಾಲಕರು
ಕವಿ, ಹಾಡುಗಾರರು ಹೇಗೆ ನಿನ್ನನ್ನು ಹೊಗಳುವುದು ಎಂದಿದ್ದಾರೆ|೧೫|

ನೀನು ಉಪಕಾರವನ್ನು ಸುಗ್ರೀವನಿಗೆ ಮಾಡಿದೆ
ರಾಮನನ್ನು ಭೇಟಿಮಾಡಿಸಿ ರಾಜಪದವಿ ಹಿಂದಕ್ಕೆ ಕೊಡಿಸಿದೆ|೧೬|

ನಿನ್ನ ಮಾತನ್ನು ವಿಭೀಷಣ ಒಪ್ಪಿದ
ಲಂಕೇಶ್ವರನೆಂದು ಇಡೀ ಜಗಕ್ಕೆ ಬಲ್ಲವನಾದ|೧೭|

ಸಹಸ್ರ ವರ್ಷಗಳಷ್ಟು ದೂರ ಹಾರಿದೆ ಭಾನು ತಲುಪಿದೆ
ಮಧುರ ಫಲವೆಂದು ಭಾವಿಸಿದೆ|೧೮|

ಪ್ರಭುವಿನ ಉಂಗುರ ಮುಖದ ಮೇಲೆ ಇಟ್ಟುಕೊಂಡೆ
ಸಾಗರ ಹಾರಿದೆ, ಇದರಲ್ಲಿ ಅಚ್ಚರಿ ಇಲ್ಲ |೧೯|

ಕಷ್ಟ ಕೆಲಸಗಳು ಜಗತ್ತಿನ್ನಲ್ಲಿ ಎಷ್ಟೇ ಇರಲಿ
ನಿನ್ನ ಅನುಗ್ರಹವಿದ್ದಲ್ಲಿ ಸುಗಮವಾಗಿ ಆಗುತ್ತವೆ|೨೦|

ರಾಮ ದ್ವಾರಕ್ಕೆ ನೀನು ರಕ್ಷಕ
ನಿನ್ನ ಆಜ್ಞೆ ಇಲ್ಲದೆ ಯಾರೂ ಪ್ರವೇಶ ಮಾಡಲಾಗುವುದಿಲ್ಲ |೨೧|

ಎಲ್ಲ ಸುಖಗಳು ನಿನ್ನ ಬಳಿ ಇವೆ
ನೀನು ರಕ್ಷಕನಾಗಿರುವಾಗ ಹೆದರಿಕೆ ಯಾಕೆ |೨೨|

ನಿನ್ನ ತೇಜಸ್ಸನ್ನು ವಧಿಸಲು ನಿನ್ನಿಂದ ಸಾಧಯವಷ್ಟೇ
ಮೂರು ಲೋಕಗಳು ನಿನಗೆ ಹೆದರಿ ನಡುಗುತ್ತವೆ |೨೩|

ಭೂತ ಪಿಶಾಚಿಗಳು ಹತ್ತಿರ ಬರುವುದಿಲ್ಲ,
ಮಹಾವೀರನ ನಾಮ ಯಾವಾಗ ಕೇಳುತ್ತಾರೋ ಆಗ |೨೪|

ರೋಗಗಳು ನಾಶವಾಗುತ್ತವೆ,  ಎಲ್ಲ ನೋವುಗಳು ಅಂತ್ಯವಾಗುತ್ತವೆ
ಈ ಮಹಾವೀರನ ನಿರಂತರ ಜಪ ಮಾಡಿದರೆ |೨೫|

ಸಂಕಟಗಳನ್ನು ಹನುಮಾನ್ ನಿವಾರಿಸುತ್ತಾನೆ
ಮನ, ಕಾರ್ಯ, ವಚನಗಳಲ್ಲಿ ನಿನ್ನ ಧ್ಯಾನ ಮಾಡಿದರೆ |೨೬|

ಎಲ್ಲ ತಪಸ್ವಿಗಳಿಗೆ ರಾಮ ರಾಜ
ನೀನು ಅವರ ಕೆಲಸ ಮಾಡಿ ಕೊಡುತ್ತೀಯಾ |೨೭|

ಬಹಳ ಆಸೆಗಳನ್ನು ಯಾರು ಇಟ್ಟುಕೊಂಡಿರುತ್ತಾರೋ
ಅವರಿಗೆ ಮಿತಿಯಿಲ್ಲದ ಫಲಗಳನ್ನು ಕೊಡುತ್ತಾನೆ |೨೮|

ನಾಲಕ್ಕೂ ಯುಗಗಳಲ್ಲಿ ನಿನ್ನ ಪ್ರತಾಪ ತುಂಬಿದೆ
ನಿನ್ನ ಕೀರ್ತಿ ಪ್ರಸಿದ್ಧ ಜಗತ್ತು ನಿನ್ನ ಪ್ರಕಾಶದಿಂದ ತುಂಬಿದೆ |೨೯|

ಸಾಧು ಮತ್ತು ಸಂತರಿಗೆ ನೀನು ರಕ್ಷಕ
ಅಸುರರಿಗೆ ರಾಮ ಆತ್ಮೀಯ |೩೦|

ಅಷ್ಟಸಿದ್ಧಿ ಮತ್ತು ನವನಿಧಿಗಳ ಕೊಡುವವನೇ
ಹೇಗೆ ಜಾನಕಿ ನಿನಗೆ ವರ ಕೊಟ್ಟಳೋ ಹಾಗೆ ಕೊಡುತ್ತೀಯಾ |೩೧|

ರಾಮ ರಸಾಯನ ನಿನ್ನ ಬಳಿ ಇದೆ
ಸದಾ ನೀನು ರಾಮ ದಾಸನಾಗಿರುತ್ತೀಯ |೩೨|

ನಿನ್ನ ಭಜನೆ ಮಾಡಿದರೆ ರಾಮನು ಸಿಗುತ್ತಾನೆ
ಜನ್ಮಜನ್ಮಗಳ ದುಃಖ ಕಳೆದು ಹೋಗುತ್ತದೆ |೩೩|

ಅಂತ್ಯಕಾಲದಲ್ಲಿ ರಘುಪತಿಯ ಪುರಕ್ಕೆ ಹೋದರೆ
ಹರಿಭಕ್ತನಾಗಿ ಅವನು ಅಲ್ಲಿ ಜನ್ಮಿಸುತ್ತಾನೆ |೩೪|

ಬೇರೆ ದೇವತೆಗಳಿಗೆ ಚಿತ್ತ ಹರಿಸದಿದ್ದರೂ
ಹನುಮನ ಸೇವೆ ಮಾಡಿದರೆ ಎಲ್ಲ ಸುಖಗಳು ಸಿಗುತ್ತವೆ |೩೫|

ಸಂಕಟ ನಾಶ ಮಾಡಿ, ಎಲ್ಲ ನೋವು ಕಳೆಯುತ್ತಾನೆ
ಅದು ಯಾರಿಗೆಂದರೆ ಹನುಮಂತ ಸ್ಮರಣೆ ಮಾಡಿದವರಿಗೆ |೩೬|

ಜಯವಾಗಲಿ ಹನುಮನಿಗೆ ಜಯವಾಗಲಿ ಇಂದ್ರಿಯಗಳ ಒಡೆಯನಿಗೆ
ಕೃಪೆ ಮಾಡು ಹೇ ಗುರುದೇವನ ಹಾಗೆ |೩೭|

ಯಾರು ಇದನ್ನು ನೂರು ಸಲ ಪಠಿಸುತ್ತಾರೋ
ಸಂಸಾರ ಬಂಧನದಿಂದ ಮುಕ್ತಿ ಮತ್ತು ಮಹಾಸುಖ ಸಿಗುತ್ತದೆ |೩೮|

ಯಾರು ಈ ಹನುಮಾನ್ ಚಾಲೀಸಾ ಓದುತ್ತಾರೋ
ಅವರಿಗೆ ಸಿದ್ಧಿ ಲಭಿಸುತ್ತದೆ ಇದಕ್ಕೆ ಗೌರೀಶನೇ ಸಾಕ್ಷಿ |೩೯|

ತುಳಸಿದಾಸರು ಯಾವಾಗಲೂ ಹರಿದಾಸರು
ಒಡೆಯನೇ ನನ್ನ ಹೃದಯದಲ್ಲಿ ನೆಲೆಸು |೪೦|

Comments

Popular posts from this blog

Hanuman Chalisa Kannada PDF Download

Hanuman Chalisa Kannada Book/PDF Download: Download Shree Hanuman Chalisa PDF in Kannada here. Hanuman Chalisa Kannada Book . Click here to Download ! ಶ್ರೀ ಹನುಮನ ಚಾಲಿಸ ಪ್ರಾರಂಭ! ದೋಹಾ: ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ | ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ || ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ | ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ್ || ಧ್ಯಾನಮ್ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ | ರಾಮಾಯಣ ಮಹಾಮಾಲಾ ರತ್ನಂ ವಂದೇ ಅನಿಲಾತ್ಮಜಮ್ || ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ | ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ || ಚೌಪಾಈಜಯ ಹನುಮಾನ ಜ್ಞಾನ ಗುಣ ಸಾಗರ | ಜಯ ಕಪೀಶ ತಿಹು ಲೋಕ ಉಜಾಗರ || 1 || ರಾಮದೂತ ಅತುಲಿತ ಬಲಧಾಮಾ | ಅಂಜನಿ ಪುತ್ರ ಪವನಸುತ ನಾಮಾ || 2 || ಮಹಾವೀರ ವಿಕ್ರಮ ಬಜರಂಗೀ | ಕುಮತಿ ನಿವಾರ ಸುಮತಿ ಕೇ ಸಂಗೀ ||3 || ಕಂಚನ ವರಣ ವಿರಾಜ ಸುವೇಶಾ | ಕಾನನ ಕುಂಡಲ ಕುಂಚಿತ ಕೇಶಾ || 4 || ಹಾಥವಜ್ರ ಔ ಧ್ವಜಾ ವಿರಾಜೈ | ಕಾಂಥೇ ಮೂಂಜ ಜನೇವೂ ಸಾಜೈ || 5|| ಶಂಕರ ಸುವನ ಕೇಸರೀ ನಂದನ | ತೇಜ ಪ್ರತಾಪ ಮಹಾಜಗ ವಂದನ || 6 || ವಿದ್ಯಾವಾನ ಗುಣೀ ಅತಿ ಚಾತುರ | ರಾಮ ಕಾಜ ಕರಿವೇ ಕೋ...

Hanuman Chalisa Kannada Lyrics

Hanuman Chalisa in Kannada: ಹನುಮಾನ್ ಚಾಲಿಸಾದ ಕರ್ತೃತ್ವವನ್ನು ಕ್ರಿ.ಶ 16 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಕವಿ-ಸಂತ ತುಳಸಿದಾಸ್ ಎಂದು ಹೇಳಲಾಗಿದೆ. ಯಾರು ಹನುಮನ ಬಗ್ಗೆ ಪೂರ್ಣ ಭಕ್ತಿಯಿಂದ ಜಪಿಸುತ್ತಾರೋ ಅವರಿಗೆ ಹನುಮನ ಅನುಗ್ರಹವಿದೆ ಎಂದು ಚಾಲಿಸಾದ ಕೊನೆಯ ಚರಣದಲ್ಲಿ ಹೇಳಲಾಗಿದೆ. ವಿಶ್ವಾದ್ಯಂತ ಹಿಂದೂಗಳಲ್ಲಿ, ಚಾಲಿಸಾ ಜಪಿಸುವುದರಿಂದ ದುಷ್ಟಶಕ್ತಿಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಲ್ಲಿ ಹನುಮನ ದೈವಿಕ ಹಸ್ತಕ್ಷೇಪವನ್ನು ಆಹ್ವಾನಿಸುತ್ತದೆ ಎಂಬುದು ಬಹಳ ಜನಪ್ರಿಯ ನಂಬಿಕೆಯಾಗಿದೆ. ಶ್ರೀ ಹನುಮನ ಚಾಲಿಸ ಪ್ರಾರಂಭ! ದೋಹಾ: ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ | ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ || ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ | ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ್ || ಧ್ಯಾನಮ್ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ | ರಾಮಾಯಣ ಮಹಾಮಾಲಾ ರತ್ನಂ ವಂದೇ ಅನಿಲಾತ್ಮಜಮ್ || ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ | ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ || ಚೌಪಾಈಜಯ ಹನುಮಾನ ಜ್ಞಾನ ಗುಣ ಸಾಗರ | ಜಯ ಕಪೀಶ ತಿಹು ಲೋಕ ಉಜಾಗರ || 1 || ರಾಮದೂತ ಅತುಲಿತ ಬಲಧಾಮಾ | ಅಂಜನಿ ಪುತ್ರ ಪವನಸುತ ನಾಮಾ || 2 || ಮಹಾವೀರ ವಿಕ್ರಮ ಬಜರಂಗೀ | ಕುಮತಿ ನಿವಾರ ಸುಮತಿ ಕೇ ಸಂಗೀ ||3 || ...